Tuesday 22 August 2017

20-8-2017 ಭಾನುವಾರದಂದು ಬರಗೂರಿನಲ್ಲಿ ನಡೆದ ಕೆಂಪೇಗೌಡ ಜಯಂತ್ಯೋತ್ಸವದಲ್ಲಿ ಸನ್ಮಾನ

ಬರಗೂರಿನಲ್ಲಿ ನಡೆದ ಕೆಂಪೇಗೌಡ ಜಯಂತ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸುವ ನೆಪದಲ್ಲಿ ಸುಮಾರು 15 ವರ್ಷಗಳ ನಂತರ ನನ್ನ ಶಾಲೆಗೆ ಹೋಗಿ, ನಾ ಕ್ಲಾಸಿನಲ್ಲಿ ಕೂರುತ್ತಿದ್ದ ಜಾಗದಲ್ಲಿ ಕೂತಾಗ ಏನೋ ಒಂದು ನೆಮ್ಮದಿಯ ಭಾವ. ನಾ ಪೇಪರ್ ಓದುತ್ತಿದ್ದ ಕಟ್ಟೆಯ ಮೇಲೆ ನಿಂತಾಗ ಅದೇ ಹಳೆಯ ದಿನಗಳು ಕಣ್ಣ ಮುಂದೆ ಜಾರಿದ ಅನುಭವ.
ನನ್ನ ಬಾಲ್ಯದ ಸ್ಪೂರ್ತಿಚೈತನ್ಯಗಳಲ್ಲಿ ಒಬ್ಬರಾದ, ಬಡಜನರಿಗೆ ಔಷಧಿ ಕೊಡುವುದಲ್ಲದೆ, ಮನೆ ಪರಿಸ್ಥಿತಿಯನ್ನು ವಿಚಾರಿಸಿ ಊರುಸೇರಲು ಬಸ್ ಚಾರ್ಜ್ ಅನ್ನು ಕೊಟ್ಟು ಕಳಿಸುವಂತಹ ಕರುಣಾಮಯಿ ಡಾಕ್ಟರ್ ಮುದ್ದರಂಗಪ್ಪರವರನ್ನು ಭೇಟಿ ಮಾಡಿದ ಶುಭ ಘಳಿಗೆ.  ಇನ್ನು ಹತ್ತಲವು ಖುಷಿಗೆ ಕಾರಣವಾದ ಈ ಅವಕಾಶ ಕೊಟ್ಟ ಕೆಂಪೇಗೌಡ ಜಯಂತೋತ್ಸವ ಸಮಿತಿಯ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು.

















No comments:

Post a Comment

Note: only a member of this blog may post a comment.